Saturday, June 2, 2018

ಶ್ರೀರಾಮರಕ್ಷಾಸ್ತೋತ್ರಮ್



ಶ್ರೀರಾಮರಕ್ಷಾಸ್ತೋತ್ರಮ್

ಪ್ರಸ್ತಾವನೆ :

ಶ್ರೀ ರಾಮರಕ್ಷಾಸ್ತೋತ್ರವು ಶ್ರೀರಾಮಚಂದ್ರನ ಗುಣಗಾನದ  ಪ್ರಾರ್ಥನಾ ರೂಪದಲ್ಲಿ ಶ್ರೀರಾಮಚಂದ್ರನ ಸಂಪೂರ್ಣ ರಕ್ಷಣೆಯನ್ನು ಬೇಡುವಂತೆ ರಚಿಸಿರುವ ಅತ್ಯಂತ ಶಕ್ತಿಶಾಲಿ ದೈವೀ ಸ್ತೋತ್ರ. ವೇದಕಾಲದ ಮಹರ್ಷಿ ಬುಧಕೌಶಿಕರಿಗೆ ಕನಸಿನಲ್ಲಿ ಭಗವಾನ್ ಶಂಕರನು ಕಾಣಿಸಿಕೊಂಡು ಈ ಸ್ತೋತ್ರವನ್ನು ರಚಿಸುವಂತೆ ಆಜ್ಞಾಪಿಸಿದನು. ಕನಸಿನಿಂದ ಹೊರಬಂದ ಬುಧಕೌಶಿಕರು ಬ್ರಾಹ್ಮೀ ಮುಹೂರ್ತದಲ್ಲೇ ಈ ಸ್ತೋತ್ರವನ್ನು ರಚಿಸಿದರು. ಋಗ್ವೇದದಲ್ಲಿ ಈ ಸ್ತೋತ್ರದ ಬಗೆಗೆ ಉಲ್ಲೇಖವಿದೆ. "ರಾಮ ರಕ್ಷಾ " ಎಂದರೆ "ರಾಮನಿಂದ ಸಂಪೂರ್ಣ ರಕ್ಷಣೆ
(ನಮಗೆ) " ಎಂದು. ಈ ಸ್ತೋತ್ರವನ್ನು " ರಾಮ ಕವಚ ಸ್ತೋತ್ರ " ಎಂದೂ ಕರೆಯಲ್ಪಡುತ್ತದೆ. ಶ್ರೀರಾಮನು ಭಕ್ತರನ್ನು ಸಂಪೂರ್ಣವಾಗಿ ಕವಚದ ಮೂಲಕ ರಕ್ಷಿಸುವನು. ಇದು ಶ್ರೀರಾಮನ ಅಸ್ತ್ರ - " ವಜ್ರಪಂಜರ" (ವಜ್ರಪಂಜರನಾಮೇದಂ). ಶ್ರೀ ರಾಮರಕ್ಷಾಸ್ತೋತ್ರ ಹಾಗೂ ಹನೂಮಾನ್ ಚಾಲೀಸ ಸ್ತೋತ್ರಗಳೆರಡನ್ನೂ ಅತ್ಯಂತ ಶಕ್ತಿಶಾಲಿ ಸ್ತೋತ್ರಗಳೆಂದು ಭಕ್ತರ ನಂಬಿಕೆ. ಚೈತ್ರಮಾಸದ ನವರಾತ್ರೆಗಳ ದಿನಗಳಲ್ಲಿಯುಗಾದಿ ದಿನದಿಂದ ಪ್ರಾರಂಭಗೊಂಡು ಶ್ರೀರಾಮ ನವಮಿಯ ವರೆಗಿನ ಒಂಬತ್ತು ದಿನಗಳಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಶುಚಿರ್ಭೂತರಾಗಿ ರಾಮರಕ್ಷಾ ಸ್ತೋತ್ರವನ್ನು ಹನ್ನೆರಡು ಬಾರಿ ಪ್ರತಿನಿತ್ಯವೂ ಪಠಿಸಿದವರಿಗೆ ಶ್ರೀರಾಮಚಂದ್ರನಿಂದ ಸಂಪೂರ್ಣ ರಕ್ಷಣೆ ಹಾಗೂ ಸಕಲ ಇಷ್ಟಾರ್ಥಗಳೂ ಈಡೇರಿ ಅಭ್ಯುದಯವನ್ನು ಹೊಂದಿ ಕಡೆಗೆ ಮುಕ್ತಿ ದೊರಕುವುದೆಂಬುದಾಗಿ ಫಲಶೃತಿಯು ತಿಳಿಯಪಡಿಸೂತ್ತದೆ. ಇದೇ ರೀತಿ ಅಶ್ವಿನಿ ನವರಾತ್ರೆಯ ದಿನಗಳಂದೂ ಸ್ತೋತ್ರ ಪಠಣೆಗೆ ಸೂಕ್ತ ಸಮಯ. ಪ್ರತಿನಿತ್ಯವೂ ಒಮ್ಮೆಯಾದರೂ ಈ ಸ್ತೋತ್ರವನ್ನು ಪಠಿಸಿದಲ್ಲಿ ಮನಸ್ಸಿಗೆ ಶಾಂತಿ, ನೆಮ್ಮದಿಗಳು ಉಂಟಾಗುವುದು.

ಶ್ರೀರಾಮರಕ್ಷಾ ಸ್ತೋತ್ರದ ಕೆಲವು ವೈಶಿಷ್ಟ್ಯತೆಗಳು :

1. ಶ್ರೀ ರಾಮ ರಕ್ಷಾಸ್ತೋತ್ರ ಮತ್ತು ಋಗ್ವೇದ :

ಶ್ರೀರಾಮನು ವೇದಗಳಲ್ಲಿನ ಪುರುಷ (ಅತ್ಯಂತ ಮಹಾನ್ ವ್ಯಕ್ತಿತ್ವ) ಮತ್ತು ಉಪನಿಷತ್ತಿನಲ್ಲಿ ವರ್ಣಿಸಿರುವ ಬ್ರಹ್ಮನ್ (ಅತ್ಯುನ್ನತ ಪರಿಪೂರ್ಣ ಅಸ್ತಿತ್ವ). ಶ್ರೀರಾಮನನ್ನು ಪುರುಷ, ವಿಷ್ಣು , ಇಂದ್ರ (ವಿಶ್ವದಲ್ಲಿನ ಪರಮೋಚ್ಚ ಚಕ್ರವರ್ತಿ ಎಂಬುದಾಗಿ) ಸಮಸ್ತ ವೇದ ಹಾಗೂ ಉಪನಿಷತ್ತುಗಳಲ್ಲಿ ಹೊಗಳಲಾಗಿದೆ.

ಯ ಇಮೆ ರೋದಸೀ ಉಭೇ ಅಹಮಿಂದ್ರಮ್ ಅತುಷ್ಟವಮ್ |
ವಿಶ್ವಾಮಿತ್ರಸ್ಯ ರಕ್ಷತಿ ಬ್ರಹ್ಮೇಂದ್ರಂ ಭಾರತಂ ಜನಮ್ ||
                                             ( ಋಗ್ವೇದ 3.53.12 )

ಹೇ ಮಾನವರೇ ! ವಿಶ್ವಾಮಿತ್ರನಾದ ನಾನು ಶ್ರೀರಾಮರಕ್ಷಾ ಸ್ತೋತ್ರದ ಮೂಲಕ ಭಗವಾನ್ ಶ್ರೀರಾಮಚಂದ್ರನನ್ನು ( ಇಂದ್ರ ) ಹೊಗಳಿ ಸ್ತುತಿಸಿರುವೆ. ಆ ರಾಮನು ( ಇಂದ್ರ ) ಬ್ರಹ್ಮನು, ಭೂಲೋಕ ಹಾಗೂ ಸ್ವರ್ಗಲೋಕಗಳನ್ನು ಪೋಷಿಸುವವನು ! ವಿಶ್ವಾಮಿತ್ರನ ಈ ರಾಮ ರಕ್ಷಾ ಸ್ತೋತ್ರವು ಭರತ ವಂಶದ ಸಕಲ ಮನುಜರನ್ನೂ ರಕ್ಷಿಸಲಿ.
ಇಲ್ಲಿ ಶ್ಲೋಕದಲ್ಲಿ ಬರುವ "ರಕ್ಷತಿ" ಪದವು ರಕ್ಷಾ ಸ್ತೋತ್ರವನ್ನು ಸೂಚಿಸುತ್ತದೆ. "ಭಾರತಂ ಜನಮ್ " ಎಂದರೆ ಭರತ ಖಂಡದ ಜನಗಳು ಎಂದರ್ಥ.
ಪ್ರತಿಯೊಬ್ಬ ರಾಮ ಭಕ್ತನೂ ಪ್ರತಿನಿತ್ಯ ರಾಮ ರಕ್ಷಾ ಸ್ತೋತ್ರವನ್ನು ಪಠಿಸಬೇಕು ಹಾಗೂ ಶ್ರೀರಾಮನು ಅವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾನೆ.

ಋಗ್ವೇದದ ಮುಂದಿನ ಶ್ಲೋಕದಲ್ಲಿ ( 3.53.13 )

ವಿಶ್ವಾಮಿತ್ರಾ ಅರಾಸತ ಬ್ರಹ್ಮ ಇಂದ್ರಾಯ ವಜ್ರಿಣೇ |
ಕರತ್ ಇತ್ ನಃ ಸುರಾಧಸಃ ||

ವಜ್ರಧಾರಿ ಇಂದ್ರನಿಗಾಗಿ ವಿಶ್ವಾಮಿತ್ರನ ವಂಶಜರು ಮಂತ್ರಗಳನ್ನು ರೂಪಿಸಿರುವರು. ಅನುಗ್ರಹಿಸಲಿ ಆತನು ನಮಗೆ ಮಂಗಳಕರ ಐಶ್ವರ್ಯಗಳನ್ನು.
ಸುರಾಧಸಃ = ಮಂಗಳಕರ ಐಶ್ವರ್ಯಗಳನು.

ವಿಶ್ವಾಮಿತ್ರರು ಶ್ರೀರಾಮನಿಗೆ ಬಲ ಮತ್ತು ಅತಿಬಲ ಮಂತ್ರಗಳನ್ನು ಉಪದೇಶಿಸುತ್ತಾರೆ.
ಬಲ ಅತಿಬಲ ಶಕ್ತಿಗಳ ಶ್ಲೋಕಗಳನ್ನು ಋಗ್ವೇದದ 3.53 ನೇ ಅಧ್ಯಾಯದಲ್ಲಿ ವಿವರವಾಗಿ ವರ್ಣಿಸಲಾಗಿದೆ. ವಾಲ್ಮೀಕಿ ರಾಮಾಯಣದಲ್ಲೂ ಬಲ ಅತಿಬಲ ವಿದ್ಯೆಯ ಬಗ್ಗೆ ವಿವರವಾಗಿ ವರ್ಣಿಸಲಾಗಿದೆ. ವಾಲ್ಮೀಕಿ ರಾಮಾಯಣದ 1.4.6 ನೇ ಶ್ಲೋಕಗಳಲ್ಲಿ ವಿವರವಾಗಿ ವರ್ಣಿಸಿರುವುದು ವೇದದಲ್ಲಿನ ಉಲ್ಲೇಖವನ್ನು ಪುಷ್ಟೀಕರಿಸುವ ಸಲುವಾಗಿ.
ಬಲ ಅತಿಬಲ ವಿದ್ಯೆಗೆ ಸಂಬಂಧಿಸಿದ ಸ್ಪಷ್ಟ ಶ್ಲೋಕಗಳು ಋಗ್ವೇದದಲ್ಲಿನ 3.53.17, 18, 19, 20 ಮತ್ತು  21.

ಬಲಂ ಧೇಹಿ ತನೂಷು ನೋ ಬಲಮ್ ಇಂದ್ರ ಅನಳತ್ಸು ನಃ |
ಬಲಂ ತೋಕಾಯ ತನಯಾಯ ಜೀವಸೇ ತ್ವಂ ಹಿ ಬಲದಾ ಅಸಿ ||       (ಋಗ್ವೇದ 3.53.18)

ಹೀಗೆ ರಾಮ ರಕ್ಷಾ ಸ್ತೋತ್ರವು ವೇದಗಳ ಮೂಲವನ್ನು ಹೊಂದಿದೆ.

2. ರಾಮ ರಕ್ಷಾಸ್ತೋತ್ರವು ಶ್ರೀರಾಮನ ಅನೇಕ ಸುಮಧುರ ನಾಮಗಳ ಭಂಡಾರ :

ರಾಮರಕ್ಷಾ ಸ್ತೋತ್ರದಲ್ಲಿ ಶ್ರೀರಾಮನ ಅನೇಕ ಮಧುರವಾದ ನಾಮಗಳು ಇರುವುದು. ಹಾಗಾಗಿ ಇದನ್ನು ಸ್ತುತಿಸುವುದು ಹೃದಯ ಹಾಗೂ ಮನಸ್ಸಿಗೆ ಅತ್ಯಂತ ಆಪ್ಯಾಯಮನವಾಗಿದ್ದು ಅಮೃತವನ್ನು ಪಾನಮಾಡಿದಷ್ಟು ಸಂತಸವನ್ನು ನೀಡುವುದು. ಈ ಸ್ತೋತ್ರವನ್ನು ಪಠಿಸುವಾಗ ಶ್ರೀರಾಮನ ಅನೇಕ ಸುಂದರ ನಾಮಗಳನ್ನು ನಾಲಿಗೆಯ ಮೇಲೆ ಅಮೃತದಂತೆ ಇರಿಸಿಕೊಂಡು ಸ್ತೋತ್ರದುದ್ದಕ್ಕೂ ಅವುಗಳನ್ನೇ ಮನನ ಮಾಡುತ್ತಾ ಇರುವುದು ಮಹದಾನಂದಕರವಾದ ವಿಷಯ.

ಈ ಸ್ತೋತ್ರದಲ್ಲಿ ಬರುವ ಶ್ರೀರಾಮನ ಸುಂದರ ಹೆಸರುಗಳೆಂದರೆ :
ಶ್ರೀರಾಮ , ರಾಮಭದ್ರ ( ಸದ್ಗುಣ ಸಂಪನ್ನ ) ,  ರಾಮಚಂದ್ರ ( ಮುಖಭಾವವು ಪೂರ್ಣ ಚಂದ್ರನಂತೆ), ರಾಘವ , ರಘುನಂದನ , ರಘುನಾಥ , ದಶರಥಾತ್ಮಜ, ಕೌಶಲ್ಯೇಯ , ವಿಶ್ವಾಮಿತ್ರಪ್ರಿಯ , ಸೌಮಿತ್ರಿ-ವತ್ಸಲ (ಲಕ್ಷ್ಮಣನ ಪ್ರೀತಿಪಾತ್ರನು ) , ಸೀತಾಪತಿ , ಜಮದಗ್ನ್ಯಾಜಿತ್ ( ಜಮದಗ್ನಿಯ ಮಗನನ್ನು ಜಯಿಸಿದವನು ), ಭರತವಂದಿತ , ವಿದ್ಯಾನಿಧಿ, ಖರದ್ವಂಶಿ ( ಖರ ದೈತ್ಯನ ಸಂಹಾರ ಮಾಡಿದವನು ), ಜಾಂಬ್ವದಾಶ್ರಯ ( ಜಾಂಬವಂತನು ಆಶ್ರಯಿಸಿದವ), ಸುಗ್ರೀವೇಶ , ಹನೂಮತ್ಪ್ರಭು , ರಘೋತ್ತಮ , ದಾಶರಥಿ, ಕಾಕುತ್ಸ್ಥ ( ರಘುವಂಶದ ರಾಜಕುಮಾರ ), ಭರತಾಗ್ರಜ, ಪುರುಷ ( ವೇದಗಳ ಸರ್ವೋಚ್ಚ ಪುರುಷ ), ಪೂರ್ಣ ( ಸಂಪೂರ್ಣ, ಪರಿಪೂರ್ಣನಾದವನು), ಜಾನಕಿವಲ್ಲಭ, ಪುರಾಣ-ಪುರುಷೋತ್ತಮ (ವೈದಿಕ ಗ್ರಂಥಗಳಲ್ಲಿನ ಪ್ರಖ್ಯಾತನಾದ ಪುರುಷೋತ್ತಮ), ಇತ್ಯಾದಿ.

ಶ್ರೀ ಗಣೇಶಾಯ ನಮಃ

ಅಸ್ಯ ಶ್ರೀರಾಮರಕ್ಷಾ ಸ್ತೋತ್ರ ಮಂತ್ರಸ್ಯ
ಬುಧ ಕೌಶಿಕ ಋಷಿ, ಶ್ರೀ ಸೀತಾ ರಾಮಚಂದ್ರ ದೇವತ,
ಅನುಷ್ಟುಪ್ ಛಂದಃ ಸೀತಾ ಶಕ್ತಿಃ ಶ್ರೀಮದ್ ಹನುಮಾನ್ ಕೀಲಕಮ್
ಶ್ರೀಸೀತಾರಾಮಚಂದ್ರ ಪ್ರೀತ್ಯರ್ಥೇ ಜಪೇ ವಿನಿಯೋಗಃ

ವಿವರಣೆ :

ಓಂ ಮಹಾಗಣಪತಿಗೆ ನಮನಗಳು. ಈ ಸ್ತೋತ್ರದ ಕತೃವು ಬುಧ ಕೌಶಿಕರು. ಸ್ತೋತ್ರದ ದೇವರುಗಳು ಸೀತಾ ರಾಮಚಂದ್ರ. ಈ ಸ್ತೋತ್ರವನ್ನು ಅನುಷ್ಟುಪ್ ಛಂದಸ್ಸಿನಲ್ಲಿ ರಚಿಸಲಾಗಿದೆ. ಈ ಸ್ತೋತ್ರದ ಶಕ್ತಿಯು ಸೀತಾಮಾತೆ. ಮಧ್ಯಸ್ಥನಾಗಿರುವವನು ಹನುಮಂತ ಮತ್ತು ಈ ಸ್ತೋತ್ರವನ್ನು ಪಠಿಸುವುದಕ್ಕೆ ಶ್ರೇಷ್ಠವಾದದ್ದು.

ಸಂಸ್ಕೃತದಲ್ಲಿ : ಧ್ಯಾನ ಶ್ಲೋಕ

ಧ್ಯಾಯೇದಾಜಾನಬಾಹುಂ ಧೃತಶರಧನುಷಂ ಬುದ್ಧ ಪದ್ಮಾಸನಸ್ಥಂ
ಪೀತಂ ವಾಸೋ ವಸಾನಂ ನವಕಮಲದಲ ಸ್ಪರ್ಧಿನೇತ್ರಂ ಪ್ರಸನ್ನಂ
ವಾಮಾಂಕಾರೂಢ ಸೀತಾಮುಖಕಮಲ ಮಿಲಲ್ಲೋಚನಂ ನೀರದಾಭಂ
ನಾನಾಲಂಕಾರದೀಪ್ತಂ ದಧತಮುರುಜಟಾಮಂಡಲಂ ರಾಮಚಂದ್ರಂ ।।
ಕನ್ನಡದಲ್ಲಿ:

ಧ್ಯಾನಿಸುವುದಾಜಾನುಬಾಹು ಧನುರ್ಬಾಣಧಾರಿ ಪದ್ಮಾಸನಸ್ಥನನು
ಪೀತಾಂಬರಧಾರಿಯಂ ಪೊಸದಾವರೆಕಣ್ಗಳವನಂ ಪ್ರಸನ್ನನ
ವಾಮಾಂಕಸ್ಥಿತ ಸೀತೆಯ ಮುಖಕಮಲದೊಳು ದಿಟ್ಟನೆಟ್ಟ ಮೇಘಕಾಂತನ
ವಿವಿಧಾಲಂಕಾರ ಶೋಭಿತನ ಜಟಾಜೂಟಧರ ರಾಮಚಂದ್ರನನು

ವಿವರಣೆ :
ಧ್ಯಾನದ ಪ್ರಾರಂಭ :
ಆಜಾನುಬಾಹುವಾದ, ಬಿಲ್ಲು ಬಾಣಗಳನ್ನು ಹಿಡಿದಿರುವ, ಕಮಲದ ಭಂಗಿಯಂತೆ  ಆಸೀನನಾಗಿರುವಹಳದಿ ವಸ್ತ್ರವನ್ನು ಧರಿಸಿರುವ, ಅವನ ಕಣ್ಣುಗಳು ಶುಭ್ರವಾದ ಕಮಲ ದಳಗಳೊಂದಿಗೆ ಸ್ಪರ್ಧಿಸುತ್ತಿರುವ, ನಿತ್ಯ ತೃಪ್ತನಾದ, ತನ್ನ ದೃಷ್ಟಿಯನ್ನು  ತನ್ನ ಎಡ ತೊಡೆಯಮೇಲೆ ಆಸೀನಳಾಗಿರುವ , ಹಾಗೂ ಮೈಬಣ್ಣವು ಮಳೆಯ ಮೋಡವನ್ನು ಹೋಲುವನಾನಾ ವಿಧದ ಆಭರಣಗಳಿಂದ ಪ್ರಕಾಶಿಸುತ್ತಿರುವ, ತೊಡೆಯನ್ನು ಮುಟ್ಟುತ್ತಿರುವ ಸುಂದರವಾಗಿ ಹೆಣೆದಿರುವ ಕೂದಲುಗಳಿಂದ ಶೋಭಿತಳಾದಸೀತೆಯ ಕಮಲ ಮುಖದಮೇಲೆ ನೆಟ್ಟಿರುವ, ಭಗವಾನ್ ಶ್ರೀರಾಮಚಂದ್ರನನ್ನು ಕುರಿತು ನಾನು ಧ್ಯಾನಿಸುವೆ. ಆಜಾನುಬಾಹುವೆಂದರೆ ಯಾರ ಹಸ್ತದ ತುದಿಯು ಅವನು ನೇರವಾಗಿ ನಿಂತಿರುವಾಗ ಮಂಡಿಯನ್ನು ಮುಟ್ಟುತ್ತದೋ ಅವನೇ ಆಜಾನುಬಾಹು. ಅವನು ಮನುಕುಲದಲ್ಲಿ ಜನಿಸಿದ ಬೇರಾರೂ ಅಲ್ಲ , ಕೇವಲ ಶ್ರೀರಾಮನು ಮಾತ್ರಹೀಗೆ ಧ್ಯಾನವು.

ಶ್ಲೋಕ - 1 - ಸಂಸ್ಕೃತದಲ್ಲಿ :

ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಂ
ಏಕೈಕಮಕ್ಷರಂ ಪುಂಸಾಂ ಮಹಾಪಾತಕನಾಶನಂ    
ಕನ್ನಡದಲ್ಲಿ :

ರಘುರಾಮ ಚರಿತೆಯೊಳು ಶತಕೋಟಿ ಶ್ಲೋಕಗಳು
ಒಂದೆ ಅಕ್ಷರ ಸುಡುವುದೆಮ್ಮ ಪಾಪಗಳ

ವಿವರಣೆ :

ಶ್ರೀರಾಮನ ಜೀವನ ಚರಿತ್ರೆಯು ಶತಕೋಟಿ ರಾಮಾಯಣಗಳ ಕಾವ್ಯಗಳಷ್ಟು ವಿಸ್ತಾರವಾಗಿದೆ. ಈ ಜೀವನ ಚರಿತ್ರೆಯ ಪ್ರತಿಯೊಂದು ಪದಗಳನ್ನು ಉಚ್ಚರಿಸಿದಾಗಲೂ ಪ್ರತಿಯೊಂದು ಪದಗಳಿಗೂ ಮಹಾಪಾಪಗಳನ್ನು ನಾಶಮಾಡುವ ಶಕ್ತಿಯನ್ನು ಹೊಂದಿವೆ.

ಶ್ಲೋಕ  - 2 - ಸಂಸ್ಕೃತದಲ್ಲಿ :

ಧ್ಯಾತ್ವಾ ನೀಲೋತ್ಪಲಶ್ಯಾಮಂ ರಾಮಂ ರಾಜೀವಲೋಚನಂ
ಜಾನಕೀಲಕ್ಷ್ಮಣೋಪೇತಂ ಜಟಾಮುಕುಟಮಂಡಿತಂ    
ಸಾಸಿತೂಣಧನುರ್ಬಾಣಪಾಣಿಂ ನಕ್ತಂಚರಾಂತರಂ
ಸ್ವಲೀಲಯಾ ಜಗತ್ರಾತುಂ ಆವಿರ್ಭೂತಂ ಅಜಂ ವಿಭುಂ
ಕನ್ನಡದಲ್ಲಿ :

ನೆನೆವುದು ನೀಲಕಮಲ ಶ್ಯಾಮ ರಾಮನನು ತಾಮರೆಗಣ್ಣವನ
ಸೀತೆ ಲಕ್ಷ್ಮಣರೊಡಗೂಡಿ ಜಟೆಮುಕುಟದಲಿ ಶೋಭಿಪನನು
ಖಡ್ಗಧನುರ್ಬಾಣಗಳ ಪಿಡಿದವನ ರಕ್ಕಸಾಂತಕನನು
ಸ್ವಲೀಲೆಯಿಂ ಪುಟ್ಟಿದ ಪರಮಾತ್ಮನನು ಜನ್ಮರಹಿತನನು

ವಿವರಣೆ :

ಕೆಂಪು ಕಮಲದ ಕಣ್ಣುಳ್ಳವ, ನೀಲವರ್ಣದ, ಮೈಕಾಂತಿಯುಳ್ಳ , ಸೀತಾ ಲಕ್ಷ್ಮಣರೊಡಗೂಡಿದ, ಸುಂದರವಾದ ಕೇಶದಮೇಲೆ ಕಿರೀಟವನ್ನು ಧರಿಸಿರುವ, ಶ್ರೀರಾಮನನ್ನು ಧ್ಯಾನಿಸೋಣ.
ತನ್ನ ಸೊಂಟದಲ್ಲಿನ ಹಿಡಿಗೆಯೊಳಗೆ ಖಡ್ಗವನ್ನಿರಿಸಿಕೊಂಡಿರುವ ಮತ್ತು ಬಿಲ್ಲು ಬಾಣಗಳನ್ನು ಧರಿಸಿರುವ ದಾನವ ಸಂಹಾರಿ ಜನನ-ಮರಣಗಳಿ ಗತೀತನು ಆದರೆ ತನ್ನ ಸ್ವಯಿಚ್ಚೆಯಿಂದ ವಿಶ್ವವನ್ನು ರಕ್ಷಿಸಲು ಅವತಾರವೆತ್ತಿದ ಶ್ರೀರಾಮನನ್ನು ಧ್ಯಾನಿಸೋಣ.

ಶ್ಲೋಕ - 3 -  ಸಂಸ್ಕೃತದಲ್ಲಿ :

ರಾಮರಕ್ಷಾಂ ಪಠೇತ್ಪ್ರಾಜ್ಞಃ ಪಾಪಘ್ನೀಂ ಸರ್ವಕಾಮದಾಂ
ಶಿರೋ ಮೇ ರಾಘವಃ ಪಾತು ಭಾಲಂ ದಶರಥಾತ್ಮಜಃ     
ಕೌಸಲ್ಯೆಯೋ ದೃಶೌ ಪಾತು ವಿಶ್ವಾಮಿತ್ರಪ್ರಿಯಶ್ರುತೀ
ಘ್ರಾಣಂ ಪಾತು ಮುಖತ್ರಾತಾ ಮುಖಂ ಸೌಮಿತ್ರಿವತ್ಸಲಃ
ಕನ್ನಡದಲ್ಲಿ :

ಪಠಿಸಲುತ್ತಮರು ಪಾಪಹರ ಇಷ್ಟಾರ್ಥಪ್ರದ ರಾಮರಕ್ಷಾಸ್ತೋತ್ರವನು
ಎನ್ನ ಶಿರವ ರಕ್ಷಿಸಲಿ ರಾಘವನು ಹಣೆಯ ದಶರಥನ ಸುತನು
ಕೌಸಲ್ಯಾಪುತ್ರ ಕಣ್ಣ ರಕ್ಷಿಸಲಿ ವಿಶ್ವಾಮಿತ್ರ ಪ್ರಿಯನು ಕಿವಿಯ
ಯಜ್ಞರಕ್ಷಕ ನಾಸಿಕವ ಮುಖವ ಲಕ್ಷ್ಮಣವತ್ಸಲ


ವಿವರಣೆ :

ಪ್ರಾಜ್ಞರು ಪಾಪಗಳನ್ನು ನಾಶಪಡಿಸುವ ಭಗವಾನ್ ಶ್ರೀರಾಮನ ಸ್ತೋತ್ರವನ್ನು ಪಠಿಸಿ ಎಲ್ಲ ಕೋರಿಕೆಗಳನ್ನೂ ಈಡೇರಿಸಿಕೊಳ್ಳಲಿ. (ಇಲ್ಲಿಂದ ರಕ್ಷಿಸಲ್ಪಡಬೇಕಾದ  ದೇಹದ ವಿವಿಧ ಭಾಗಗಳನ್ನು ಪಟ್ಟಿಮಾಡಿ) ರಘುವಂಶ ಸಂಜಾತನಾದ ಶ್ರೀರಾಮನು ನನ್ನ ಶಿರವನ್ನು ರಕ್ಷಿಸಲಿ. ದಶರಥಾತ್ಮಜನಾದ ರಾಮನು ನನ್ನ ಹಣೆಯನ್ನು ರಕ್ಷಿಸಲಿ. ಕೌಸಲ್ಯಾತನಯನು ನನ್ನ ನೇತ್ರಗಳನ್ನು ಕಾಪಾಡಲಿ, ವಿಶ್ವಾಮಿತ್ರ ಪ್ರಿಯನಾದ ರಾಮನು ನನ್ನ ಕಿವಿಗಳನ್ನು ರಕ್ಷಿಸಲಿ, ಯಜ್ಞ ರಕ್ಷಕನಾದ ರಾಮನು ನನ್ನ ನಾಸಿಕವನ್ನು ಕಾಪಾಡಲಿ, ಲಕ್ಷ್ಮಣನ ಪ್ರೀತಿಯ ಅಗ್ರಜನು ನನ್ನ ಬಾಯಿಯನ್ನು ರಕ್ಷಿಸಲಿ.

ಶ್ಲೋಕ - 4 -  ಸಂಸ್ಕೃತದಲ್ಲಿ :

ಜಿಹ್ವಾಂ ವಿದ್ಯಾನಿಧಿಃ ಪಾತು ಕಂಠಂ ಭರತವಂದಿತಃ
ಸ್ಕಂಧೌ ದಿವ್ಯಾಯುಧಃ ಪಾತು ಭುಜೌ ಭಜ್ಞೇಶಕಾರ್ಮುಕಃ
ಕರೌ ಸೀತಾಪತಿಃ ಪಾತು ಹೃದಯಂ ಜಾಮದಗ್ನ್ಯಜಿತ್
ಮಧ್ಯಂ ಪಾತು ಖರಧ್ವಂಸೀ ನಾಭಿಂ ಜಾಂಬವದಾಶ್ರಯಃ
ಕನ್ನಡದಲ್ಲಿ :

ನಾಲಗೆಯ ವಿದ್ಯೆನಿಧಿ ಪೊರೆಯಲಿ ಕೊರಳ ಭರತವಂದಿತನು
ಹೆಗಲ ದಿವ್ಯಾಯುಧನು ರಕ್ಷಿಸಲಿ ಬಾಹುಗಳ ಶಿವಧನುವ ಮುರಿದಾತ
ಕರಗಳನು ಪೊರೆಯಲಿ ಸೀತೆಯ ರಮಣ ಹೃದಯವನು ಪರಶುರಾಮಜಿತ
ಮೈಯ ಮಧ್ಯವ ಖರವೈರಿ ಪೊಕ್ಕಳನು ಜಾಂಬವಗಾಸರಿತ್ತಾತ

ವಿವರಣೆ :

ವಿದ್ಯಾಸಾಗರನು ನನ್ನ ನಾಲಗೆಯನ್ನು ರಕ್ಷಿಸಲಿ, ಭರತ ವಂದಿತ ರಾಮನು ನನ್ನ ಕುತ್ತಿಗೆಯನ್ನು ಕಾಪಾಡಲಿ, ದೈವಿ ಅಸ್ತ್ರಗಳನ್ನು ಹೊಂದಿರುವ ಶ್ರೀರಾಮನು ನನ್ನ ಭುಜಗಳನ್ನು ರಕ್ಷಿಸಲಿ, ಭಗವಾನ್ ಶಂಕರನ ಧನಸ್ಸನ್ನು ಮುರಿದ ಶ್ರೀರಾಮನು ನನ್ನ ತೋಳುಗಳನ್ನು ಕಾಪಾಡಲಿ. ಸೀತಾರಮಣನು ನನ್ನ ಹಸ್ತಗಳನ್ನು ರಕ್ಷಿಸಲಿ, ಪರಶುರಾಮನನ್ನು ಜಯಿಸಿದ ಶ್ರೀರಾಮನು ನನ್ನ ಹೃದಯವನ್ನು ಕಾಪಾಡಲಿ, ಖರ ರಾಕ್ಷಸನನ್ನು ಸಂಹಾರಮಾಡಿದ ಶ್ರೀರಾಮನು ನನ್ನ ಹೊಟ್ಟೆಯನ್ನು ರಕ್ಷಿಸಲಿ, ಜಾಂಬವಂತನಿಗೆ ಆಶ್ರಯನೀಡಿದ ಶ್ರೀರಾಮನು ನನ್ನ ಹೊಕ್ಕಳನ್ನು ಕಾಪಾಡಲಿ.

ಶ್ಲೋಕ - 5 - ಸಂಸ್ಕೃತದಲ್ಲಿ :

ಸುಗ್ರೀವೇಶಃ ಕಟೀ ಪಾತು ಸಕ್ಥಿನೀ ಹನುಮತ್ಪ್ರಭುಃ
ಊರೂ ರಘೂತ್ತಮಃ ಪಾತು ರಕ್ಷಃ ಕುಲವಿನಾಶಾಕೃತ್
ಜಾನುನೀ ಸೇತುಕೃತ್ಪಾತು ಜಂಘೇ ದಶಮುಖಾಂತಕಃ
ಪಾದೌ ವಿಭೀಷಣಶ್ರೀದಃ ಪಾತು ರಾಮೋಖಿಲಂ ವಪುಃ
ಕನ್ನಡದಲ್ಲಿ :

ಸುಗ್ರೀವನೊಡೆಯ ಸೊಂಟವನು ರಕ್ಷಿಸಲಿ ಸಂಧಿಯನು ಹನುಮನೊಡೆಯ
ತೊಡೆಗಳನು ರಘುಕುಲೋತ್ತಮನು ಪೊರೆಯಲಿ ರಕ್ಕಸ ಕುಲಾಂತಕನು
ಸೇತು ನಿರ್ಮಾತ ಮೊಳಕಾಲ ರಕ್ಷಿಸಲಿ ಮೀನುಖಂಡವ ದಶಶಿರನ ಯಮನು
ಪಾದಗಳ ವಿಭೀಷಣ ರಾಜ್ಯಸಿರಿದಾತ ರಕ್ಷಿಸಲಿಂತು ರಾಮನಖಿಲ ದೇಹವನು

ವಿವರಣೆ :

ಸುಗ್ರೀವನ ಒಡೆಯನಾದ ಶ್ರೀರಾಮನು ನನ್ನ ಸೊಂಟವನ್ನು ರಕ್ಷಿಸಲಿ, ಹನುಮಂತನ ದೈವನಾದ ರಾಮಚಂದ್ರನು ನನ್ನ ಪೃಷ್ಠವನ್ನು ಕಾಪಾಡಲಿ, ರಘುವಂಶ ಶ್ರೇಷ್ಟನು ಮತ್ತು ರಾಕ್ಷಸ ಕುಲಾಂತಕನೂ ಆದ ಶ್ರೀರಾಮನು ನನ್ನ ತೊಡೆಗಳನ್ನು ರಕ್ಷಿಸಲಿ. ಶರಧಿಗೆ ಸೇತುವೆ ಕಟ್ಟಿದ ಶ್ರೀರಾಮನು ನನ್ನ ಮಂಡಿಗಳನ್ನು ಕಾಪಾಡಲಿ, ದಶಮುಖ ರಾವಣ ಸಂಹಾರಿ ಸೀತಾಪತಿಯು ನನ್ನ ಮೊಣಕಾಲುಗಳನ್ನು ರಕ್ಷಿಸಲಿ, ಎಲ್ಲ ಸಂಪತ್ತನ್ನೂ ವಿಭೀಷಣನಿಗೆ ನೀಡಿದ ದಶರಥತನಯನು ನನ್ನ ಪಾದಗಳನ್ನು ರಕ್ಷಿಸಲಿ, ಶ್ರೀರಾಮಚಂದ್ರನು ನನ್ನ ಇಡೀ ಶರೀರವನ್ನು ರಕ್ಷಿಸಲಿ.

ಶ್ಲೋಕ - 6 - ಸಂಸ್ಕೃತದಲ್ಲಿ :

ಏತಾಂ ರಾಮಬಲೋಪೇತಾಂ ರಕ್ಷಾಂ ಯಃ ಸುಕೃತೀ ಪಠೇತ್
ಸ ಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀ ಭವೇತ್
ಕನ್ನಡದಲ್ಲಿ :

ರಾಮಬಲತುಂಬಿದೀ ಸ್ತೋತ್ರ ಪಠಿಸುವ ಸುಕೃತಿ
ದೀರ್ಘಾಯು ಸುಖಿ ಪುತ್ರವಂತನು ಜಯಿ ವಿನಯಿಯಹನು


ವಿವರಣೆ :

ಶ್ರೀರಾಮನ ಸಮಸ್ತ ಶಕ್ತಿಯುಳ್ಳ ಈ ಸ್ತೋತ್ರವನ್ನು ಪಠಿಸುವ ಸಹೃದಯಿಗೆ ದೀರ್ಘಾಯಸ್ಸು, ಸಂತೋಷ, ಪುತ್ರ, ವಿನಯ ಮತ್ತು ಗೆಲುವು ದೊರಕಲಿ.

ಶ್ಲೋಕ  - 7 - ಸಂಸ್ಕೃತದಲ್ಲಿ :

ಪಾತಾಲಭೂತಲ ವ್ಯೋಮಶ್ಚಾಚಾರಿಣಶ್ಛದ್ಮಚಾರಿಣಃ
ನ ದೃಷ್ಟಮಪಿ ಶಕ್ತಾಸ್ತೇ ರಕ್ಷಿತಂ ರಾಮನಾಮಭಿಃ
ಕನ್ನಡದಲ್ಲಿ :

ಪಾತಾಳ ನೆಲ ಬಾನಲೆವ ಛದ್ಮವೇಷದ ಪೀಡೆಗಳು
ನೋಡಲೂ ಆರವವು ರಾಮನಾಮದಿಂ ರಕ್ಷೆಪಡೆದವನ

ವಿವರಣೆ :

ಪಾತಾಳದಲ್ಲಿ ಅಲೆದಾಡುವವರಿಗೂ ಅಥವಾ ಭೂಮಿಯಲ್ಲಿ ಅಥವಾ ಭೂಮಿಯಿಂದ ಎತ್ತರದಲ್ಲಿ (ಆಕಾಶ) ಹಾರಾಡುವವರಿಗೂ ಅಥವಾ ತಮ್ಮ ರೂಪವನ್ನು ಬದಲಿಸಿ ರಹಸ್ಯವಾಗಿ ಅಲೆದಾಡುವವರಿಗೂ ಶ್ರೀರಾಮನ ನಾಮಬಲದಿಂದ ರಕ್ಷಿಸಲ್ಪಟ್ಟ ಯಾರಿಗೂ ತೊಂದರೆಕೊಡುವುದಿರಲಿ, ನೋಡಲೂ ಸಾಧ್ಯವಾಗದು.

ಶ್ಲೋಕ  - 8- ಸಂಸ್ಕೃತದಲ್ಲಿ :

ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾ ಸ್ಮರನ್
ನರೋ ನ ಲಿಪ್ಯತೇ ಪಾಪೈಃ ಭುಕ್ತಿಂ ಮುಕ್ತಿಂ ಚ ವಿಂದತಿ    
ಕನ್ನಡದಲ್ಲಿ :

ರಾಮ ರಾಮಭದ್ರ ರಾಮಚಂದ್ರನೆಂದು ನೆನೆವರಿಗೆ
ಪಾಪವಂಟದು ಪಡೆವರವರು ಭುಕ್ತಿಮುಕ್ತಿಗಳ


ವಿವರಣೆ :

ಯಾರು ರಾಮ ರಾಮಭದ್ರ ಮತ್ತು ರಾಮಚಂದ್ರನನ್ನು ಸ್ತುತಿಸುತ್ತಾರೋ ಅಥವಾ ನೆನಪಿಸಿಕೊಳ್ಳುತ್ತಾರೋ ಅವರಿಗೆ ಯಾವ ಪಾಪಗಳೂ ಎಂದಿಗೂ ಸುತ್ತಿಕೊಳ್ಳುವುದಿಲ್ಲ, ಬದಲಿಗೆ ಅವರಿಗೆ ಜೀವನದುದ್ದಕ್ಕೂ ಎಲ್ಲ ಸಂತೋಷಗಳೂ ದೊರಕಿ ಕಡೆಗೆ ಮುಕ್ತಿದೊರಕುತ್ತದೆ.

ಶ್ಲೋಕ - 9 - ಸಂಸ್ಕೃತದಲ್ಲಿ :

ಜಗಜ್ಜೈತ್ರೈಕಮಂತ್ರೇಣ ರಾಮನಾಮ್ನಾಭಿರಕ್ಷಿತಂ
ಯಃ ಕಂಠೇ ಧಾರಯೇತ್ತಸ್ಯ ಕರಸ್ಥಾಃ ಸರ್ವಸಿದ್ಧಯಃ      
ಕನ್ನಡದಲ್ಲಿ :

ಜಗವ ಗೆಲುವೊಂದೇ ಮಂತ್ರ ರಾಮನಾಮವು
ಅದರ ರಕ್ಷೆ ಕೊರಳಲಿರೆ ಸಕಲಸಿದ್ಧಿಯು ಕೈವಶ


ವಿವರಣೆ :

ತ್ರಿಲೋಕದಲ್ಲೂ ಯಾರು ಪ್ರಪಂಚವನ್ನೇ ಜಯಿಸಿದ ರಾಮ ನಾಮವನ್ನು ತನ್ನ ಕೊರಳ ಸುತ್ತಾ ಧರಿಸುತ್ತಾರೋ ಅವನಿಗೆ ಸರ್ವಶಕ್ತಿಯೂ ಸಿದ್ಧಿಸುತ್ತದೆ.

ಶ್ಲೋಕ  - 10 -  ಸಂಸ್ಕೃತದಲ್ಲಿ :

ವಜ್ರಪಂಜರನಾಮೇದಂ ಯೋ ರಾಮಕವಚಂ ಸ್ಮರೇತ್
ಅವ್ಯಾಹತಾಜ್ಞಃ ಸರ್ವತ್ರ ಲಭತೇ ಜಯಮಂಗಲಂ            
ಕನ್ನಡದಲ್ಲಿ :

ರಾಮಕವಚವಿದರ ಹೆಸರು ವಜ್ರಪಂಜರ
ಸ್ಮರಿಸುವಾತನಾಜ್ಞೆ ನಡೆವುದೆಲ್ಲಲ್ಲು ಜಯ


ವಿವರಣೆ :

ಯಾರು ವಜ್ರಪಂಜರವೆಂಬ ಕವಚವನ್ನು ಸ್ತುತಿಸುತ್ತಾರೋ ಅಥವಾ ನೆನಪಿಸಿಕೊಳ್ಳುತ್ತಾರೋ ಅವರು ಹೋದಲೆಲ್ಲ ಅಪಾಯದಿಂದ ಪಾರಾಗಿ ವಿಜಯಿಯಾಗುತ್ತಾರೆ.

ಶ್ಲೋಕ - 11 - ಸಂಸ್ಕೃತದಲ್ಲಿ :

ಆದಿಷ್ಟವಾನ್ ಯಥಾ ಸ್ವಪ್ನೇ ರಾಮರಕ್ಷಾoಮಿಮಾಂ ಹರಃ
ತಥಾ ಲಿಖಿತವಾನ್ ಪ್ರಾತಃ ಪ್ರಬುದ್ಧೋ ಬುಧಕೌಶಿಕಃ     
ಕನ್ನಡದಲ್ಲಿ :

ಹರನೆ ಕನಸಲಿ ಬಂದು ರಾಮರಕ್ಷೆಯನಿದನು
ಪೇಳ್ದಂತೆ ಬರೆದ ನಸುಕಿನಲಿ ಬುಧಕೌಶಿಕನು


ವಿವರಣೆ :

ಶ್ರೀರಾಮನ ಈ ರಕ್ಷಾಸ್ತೋತ್ರವನ್ನು ಶಿವನು ಮಹರ್ಷಿ ಬುಧ ಕೌಶಿಕನಿಗೆ ಅವನ ಕನಸಿನಲ್ಲಿ ಮರುದಿನ ಮುಂಜಾನೆಯೇ ಮಹರ್ಷಿಯು ಈ ಸ್ತೋತ್ರವನ್ನು ರಚಿಸಿದನು.

ಶ್ಲೋಕ  - 12 - ಸಂಸ್ಕೃತದಲ್ಲಿ :

ಆರಾಮಃ ಕಲ್ಪವೃಕ್ಷಾಣಾಂ ವಿರಾಮಃ ಸಕಲಾಪದಾಂ
ಅಭಿರಾಮಸ್ತ್ರಿಲೋಕಾನಾಂ ರಾಮಃ ಶ್ರೀಮಾನ್ ಸ ನಃ ಪ್ರಭುಃ
ಕನ್ನಡದಲ್ಲಿ :

ಕಲ್ಪವೃಕ್ಷದುಪವನ ಸರ್ವಸಂಕಟಹಾರಿ
ತ್ರಿಲೋಕಾನಂದಕರ ಶ್ರೀಮಂತ ರಾಮ ನಮ್ಮೊಡೆಯ


ವಿವರಣೆ :

ಯಾರು ಬಯಕೆಗೆ ವಶವಾಗುವ ಮರಗಳಿಂದ ಕೂಡಿದ ಆನಂದ ವನದಂತೆ, ಮತ್ತು ಯಾರು ಅಡೆತಡೆಗಳು, ದುಃಖ, ವಿಪತ್ತುಗಳಿಗೆ ಸಂಪೂರ್ಣ ಪೂರ್ಣ ವಿರಾಮವನ್ನು ತಂದುಕೊಡುವರೋ ಮತ್ತು ತ್ರಿಲೋಕದಲ್ಲೂ ಅತ್ಯಂತ ಸೌಂದರ್ಯವಂತನೋ ಆ ಶ್ರೀರಾಮನೇ ನಮ್ಮ ಸ್ವಾಮಿಯು.

ಶ್ಲೋಕ - 13 -  ಸಂಸ್ಕೃತದಲ್ಲಿ :

ತರುಣೌ ರೂಪಸಂಪನ್ನೌ ಸುಕುಮಾರೌ ಮಹಾಬಲೌ
ಪುಂಡರೀಕವಿಶಾಲಾಕ್ಷೌ ಚೀರಕೃಷ್ಣಾಜಿನಾಂಬರೌ
ಕನ್ನಡದಲ್ಲಿ :

ತರುಣರು ಸುರೂಪಿಗಳು ಸುಕುಮಾರ ಮಹಾಬಲರು
ಕಮಲನೇತ್ರರು ನಾರುಡೆ ಜಿಂಕೆತೊಗಲುಟ್ಟವರು

ವಿವರಣೆ :

ರಾಮ ಲಕ್ಷ್ಮಣ ಸಹೋದರರು, ಸ್ಫುರದ್ರೂಪಿ, ನವ ಯೌವನಭರಿತ, ಅತ್ಯಂತ ಶಕ್ತಿಶಾಲಿಗಳು, ಕಮಲ ಪುಷ್ಪದಂಥ ವಿಶಾಲ ಕಣ್ಣುಳ್ಳವರು, ನಾರುಮಡಿಯನ್ನುಟ್ಟವರು .....

ಶ್ಲೋಕ  - 14 - ಸಂಸ್ಕೃತದಲ್ಲಿ :

ಫಲಮೂಲಾಶಿನೌ ದಾಂತೌ ತಾಪಸೌ ಬ್ರಹ್ಮಚಾರಿಣೌ
ಪುತ್ರೌ ದಶರಥಸ್ಯೈತೌ ಭ್ರಾತರೌ ರಾಮಲಕ್ಷ್ಮಣೌ
ಕನ್ನಡದಲ್ಲಿ :

ಹಣ್ಣು ಬೇರುಂಬರು ಇಂದ್ರಿಯಜಿತ ತಾಪಸರು ಬ್ರಹ್ಮಚಾರಿಗಳು
ದಶರಥನ ಸುತರು ರಾಮಲಕ್ಷ್ಮಣ ಸೋದರರು

ವಿವರಣೆ :

ದಶರಥನ ಇಬ್ಬರು ಪುತ್ರರು - ರಾಮ ಲಕ್ಷ್ಮಣ ಸಹೋದರರು, ಹಣ್ಣು ಹಂಪಲುಗಳನ್ನೇ ಸೇವಿಸಿ ಜೀವಿಸುತ್ತಿರುವವರು, ಬ್ರಹ್ಮಚರ್ಯಪಾಲನೆ ಮಾಡುತ್ತಾ ತಪಸ್ಸನ್ನಾಚರಿಸುತ್ತಿರುವ ........

ಶ್ಲೋಕ  - 15 - ಸಂಸ್ಕೃತದಲ್ಲಿ :

ಶರಣ್ಯೌ ಸರ್ವಸತ್ವಾನಾಂ ಶ್ರೇಷ್ಠೌ ಸರ್ವಧನುಷ್ಮತಾಂ
ರಕ್ಷಃ ಕುಲನಿಹಂತಾರೌ ತ್ರಾಯೇತಾಂ ನೋ ರಘೂತ್ತಮೌ
ಕನ್ನಡದಲ್ಲಿ :

ಸಕಲ ಜೀವಾಶ್ರಯರು ಬಿಲ್ಗಾರರೊಳುತ್ತಮರು
ರಕ್ಕಸಕುಲ ಧ್ವಂಸಿ ರಘೂತ್ತಮರೆಮ್ಮ ರಕ್ಷಿಸಲಿ


ವಿವರಣೆ :

ಎಲ್ಲ ಜೀವಿಗಳಿಗೂ ರಕ್ಷಣೆಯನ್ನೊದಗಿಸುತ್ತಾ ಬಿಲ್ಲುಗಾರರ ಪೈಕಿ ಅತ್ಯಂತ ಶ್ರೇಷ್ಠ ಹಾಗೂ ಮುಂಚೂಣಿಯಲ್ಲಿರುವವರು ರಾಕ್ಷಸ ಕುಲವನ್ನೆಲ್ಲಾ ಸಂಪೂರ್ಣವಾಗಿ ನಾಶಮಾಡುವ ಓ ರಘುಕುಲ ಶ್ರೇಷ್ಟ ಸಹೋದರ ರಾಮ ಲಕ್ಷ್ಮಣರೇ ನಮ್ಮನ್ನು ರಕ್ಷಿಸಿ.

ಶ್ಲೋಕ - 16 - ಸಂಸ್ಕೃತದಲ್ಲಿ :

ಆತ್ತಸಜ್ಜಧನುಷಾವಿಷುಸ್ಪೃಶಾವಕ್ಷಯಾಶುಗನಿಷಂಗಸಂಗಿನೌ
ರಕ್ಷಣಾಯ ಮಮ ರಾಮಲಕ್ಷ್ಮಣಾವಗ್ರತಃ ಪಥಿ ಸದೈವ ಗಚ್ಛತಾಂ
ಕನ್ನಡದಲ್ಲಿ :

ಬಾಣದಕ್ಷಯ ಬತ್ತಳಿಕೆ ಪೊತ್ತ ರಾಮಲಕ್ಷ್ಮಣರು
ಬಿಲ್ಲೇರಿಸೆನ್ನ ರಕ್ಷೆಗೆ ಮುಂದೆ ಸಾಗಲೆನ್ನ ಪಥದೊಳು


ವಿವರಣೆ :

ಯಾರು ಬಿಲ್ಲನ್ನು ಹೆದೆಯೇರಿಸಿ ತಮ್ಮ ಕೈಗಳನ್ನು ಬಾಣಗಳ ಬತ್ತಳಿಕೆಯಲ್ಲಿ ಸದಾ ಇರಿಸಿಕೊಂಡು ಸನ್ನದ್ಧರಾದ ರಾಮ ಲಕ್ಷ್ಮಣರು ಯಾವಾಗಲೂ ನನ್ನನ್ನು ನನ್ನ ಹಾದಿಯಲ್ಲಿ ಬೆಂಗಾವಲಾಗಿ ನನ್ನನ್ನು ರಕ್ಷಿಸಲಿ.

ಶ್ಲೋಕ - 17 - ಸಂಸ್ಕೃತದಲ್ಲಿ :

ಸನ್ನದ್ಧಃ ಕವಚೀಖಡ್ಗೀ ಚಾಪಬಾಣಧರೋ ಯುವಾ
ಗಚ್ಛನ್ಮನೋರಥೋಸ್ಮಾಕಂ ರಾಮಃ ಪಾತು ಸಲಕ್ಷಣಃ    
ಕನ್ನಡದಲ್ಲಿ :

ಕವಚಖಡ್ಗ ಧನುರ್ಬಾಣ ಸನ್ನದ್ಧನು ಯುವಕನು
ರಾಮಲಕ್ಷ್ಮನೊಡಗೂಡಿ ನಡೆಸಲೆಮ್ಮ ಮನೋರಥ

ವಿವರಣೆ :

ಖಡ್ಗ, ಗುರಾಣಿಗಳು, ಬಿಲ್ಲು ಬಾಣಗಳ ಸಹಿತರಾಗಿ ಸದಾ ಸಿದ್ದನಾಗಿ ಲಕ್ಷ್ಮಣನೊಡಗೂಡಿ ರಾಮನು ನಾವು ಪ್ರೀತಿಯಿಂದ ಯೋಚಿಸುತ್ತಿರುವ ಯೋಚನೆಗಳೇ ಜೀವತುಂಬಿ ಬಂದಂತಿರುವುದು. ಅಂಥಹ ಲಕ್ಷ್ಮಣ ಸಹಿತನಾಗಿ ಸದಾ ತಾರುಣ್ಯದಿಂದ ಕೂಡಿದ ಶ್ರೀರಾಮಚಂದ್ರನು ನಮ್ಮನ್ನು ರಕ್ಷಿಸಲಿ.

ಶ್ಲೋಕ - 18 - ಸಂಸ್ಕೃತದಲ್ಲಿ :

ರಾಮೋ ದಾಶರಥಿಃ ಶೂರೋ ಲಕ್ಷ್ಮಣಾನುಚಾರೋ ಬಲೀ
ಕಾಕುತ್ಸ್ಥಃ ಪುರುಷಃ ಪೂರ್ಣಃ ಕೌಸಲ್ಯೇಯೋ ರಘೂತ್ತಮಃ
ಕನ್ನಡದಲ್ಲಿ :

ರಾಮ ದಾಶರಥಿ ಶೂರ ಲಕ್ಷ್ಮಣನಣ್ಣ ಶಕ್ತನು
ಕಕುತ್ಸ್ಥ ವಂಶಜ ಪುರುಷ ಪೂರ್ಣನು ಕೌಸಲ್ಯಾಸುತ ರಘೂತ್ತಮನು


ವಿವರಣೆ :

ಶ್ರೀರಾಮ ದಶರಥ ನಂದನ ರಘುವಂಶದ ಕುಡಿ ಕೌಸಲ್ಯಾಸುತ ಸರ್ವಶಕ್ತಿಶಾಲಿ ಸದಾ  ಲಕ್ಷ್ಮಣನೊಡಗೂಡಿರುವ ಪುರುಷ ಶ್ರೇಷ್ಠ ಮರ್ಯಾದಾ ಪುರುಷೋತ್ತಮ.

ಶ್ಲೋಕ - 19 - ಸಂಸ್ಕೃತದಲ್ಲಿ :

ವೇದಾಂತವೇದ್ಯೋ ಯಜ್ಞೇಶಃ ಪುರಾಣಪುರುಷೋತ್ತಮಃ
ಜಾನಕೀವಲ್ಲಭಃ ಶ್ರೀಮಾನ್ ಅಪ್ರಮೇಯ ಪರಾಕ್ರಮಃ     
ಕನ್ನಡದಲ್ಲಿ :

ವೇದಾಂತವೇದ್ಯ ಯಜ್ಞೇಶ ಪುರಾಣ ಪುರುಷೋತ್ತಮ
ಜಾನಕೀರಮಣ ಸಿರಿವಂತ ಅಪ್ರಮೇಯ ಪರಾಕ್ರಮಿ

ವಿವರಣೆ :

ವೇದ ವೇದಾಂತಗಳು ಗ್ರಹಿಸಿದ, ಯಜ್ಞದೇವ, ಪುರಾತನನು ಮತ್ತು ಪುರುಷರಲ್ಲೇ ಅತ್ಯುತ್ತಮನು, ಜಾನಕಿಯ ಪ್ರೀತಿಪಾತ್ರನು, ಹಾಗೂ ಅವನ ಶೌರ್ಯವು ಅಪ್ರತಿಮವು.

ಶ್ಲೋಕ - 20 - ಸಂಸ್ಕೃತದಲ್ಲಿ :

ಇತ್ಯೇತಾನಿ ಜಪನ್ನಿತ್ಯಂ ಮದ್ಭಕ್ತಃ ಶ್ರದ್ಧಯಾನ್ವಿತಃ
ಅಶ್ವಮೇಧಾಧಿಕಂ ಪುಣ್ಯಂ ಸಂಪ್ರಾಪ್ನೋತಿ ನ ಸಂಶಯಃ   
ಕನ್ನಡದಲ್ಲಿ :

ಇಂತು ಈ ನಾಮಗಳಿಂದೆನ್ನ ಭಕ್ತರು ಶ್ರದ್ಧೆಯಿಂ ಜಪಿಸೆ
ಅಶ್ವಮೇಧಕು ಮಿಕ್ಕು ಪುಣ್ಯವ ಪಡೆವರಿದು ಸಿದ್ಧ

ವಿವರಣೆ :

ಹೀಗೆ ಶಂಕರ ಭಗವಾನನು " ನನ್ನ ಭಕ್ತರು ಶ್ರದ್ಧೆಯಿಂದ ಸಂಶಯಾತೀತರಾಗಿ ಶ್ರೀ ರಾಮನಾಮ ವನ್ನು ಸುತಿಸುತ್ತಾರೋ ಅವರಿಗೆ ಅಶ್ವಮೇಧ ಯಾಗದಿಂದ ದೊರಕುವ ಧಾರ್ಮಿಕ ಫಲಗಳಿಗಿಂತ ಮಿಗಿಲಾದ ಫಲಗಳು ದೊರಕುವುದು".

ಶ್ಲೋಕ  - 21 - ಸಂಸ್ಕೃತದಲ್ಲಿ :

ರಾಮಂ ದುರ್ವಾದಲಶ್ಯಾಮಂ ಪದ್ಮಾಕ್ಷಂ ಪೀತವಾಸಸಂ
ಸ್ತುವಂತಿ ನಾಮಭಿರ್ದಿವ್ಯೈಃ ನ ತೇ ಸಂಸಾರಿಣೋ ನರಾಃ  
ಕನ್ನಡದಲ್ಲಿ :

ಗರಿಕೆ ಹುಲ್ಲೊಲು ನೀಲ ಪದ್ಮಾಕ್ಷ ಪೀತಾಂಬರಿಯ
ದಿವ್ಯನಾಮಗಳಿಂದ ಸ್ತುತಿಪ ನರರಿಗಿಲ್ಲ ಸಂಸಾರಭಯ


ವಿವರಣೆ :

ಹಸಿರು ಹುಲ್ಲಿನ ಕಡುಬಣ್ಣವನ್ನುಳ್ಳ ಕಮಲ ಪುಷ್ಪದ ಕಣ್ಣುಳ್ಳ ಮತ್ತು ಹಳದಿ ವಸ್ತ್ರವನ್ನು ಧರಿಸಿರುವ ಶ್ರೀರಾಮನ ಗುಣಗಾನವನ್ನು  ಈ ಸ್ತೋತ್ರದ ಮೂಲಕ ಮಾಡುವವರು ಪ್ರಾಪಂಚಿಕ ಬಂಧನಗಳಿಗೆ ಸಿಲುಕಿರುವ ಸಾಮಾನ್ಯ ಮನುಷ್ಯರಂತಿರುವುದಿಲ್ಲ, ಬದಲಾಗಿ ಅವರು ಬಂಧಮುಕ್ತರು.

ಶ್ಲೋಕ  - 22 - ಸಂಸ್ಕೃತದಲ್ಲಿ :

ರಾಮಂ ಲಕ್ಷ್ಮಣಪೂರ್ವಜಂ ರಘುವರಂ ಸೀತಾಪತಿಂ ಸುಂದರಂ
ಕಾಕುತ್ಸ್ಥಂ ಕರುಣಾರ್ಣವಂ ಗುಣನಿಧಿಂ ವಿಪ್ರಪ್ರಿಯಂ ಧಾರ್ಮಿಕಂ
ಕನ್ನಡದಲ್ಲಿ :

ರಘುವರ ಲಕ್ಷ್ಮಣನಣ್ಣ ಸೀತಾಪತಿ ಸುಂದರ ಗುಣಾಢ್ಯ
ಕಕುತ್ಸ್ಥ ವಂಶಜ ಕರುಣಾಸಿಂಧು ವಿಪ್ರಪ್ರಿಯನು ಧಾರ್ಮಿಕ

ವಿವರಣೆ :

ಪರಮ ಸುಂದರನಾದ, ಲಕ್ಷ್ಮಣ ಅಗ್ರಜ, ರಘುವಂಶದ ಸರ್ವಶ್ರೇಷ್ಟ ರಾಜಕುಮಾರ, ಸೀತಾಪತಿ, ದಯಾಸಾಗರ, ಸರ್ವಗುಣ ಸಂಪನ್ನ, ಎಲ್ಲ ಧಾರ್ಮಿಕ ವ್ಯಕ್ತಿಗಳಿಗೂ ಅತ್ಯಂತ ಪ್ರೀತಿಪಾತ್ರನೂ ಮತ್ತು ಧರ್ಮ ರಕ್ಷಕನೂ ಆದ ಶ್ರೀರಾಮನಿಗೆ ನನ್ನ ಭಕ್ತಿಪೂರ್ವಕ ನಮನಗಳು.

ಶ್ಲೋಕ - 23 -  ಸಂಸ್ಕೃತದಲ್ಲಿ :

ರಾಜೇಂದ್ರಂ ಸತ್ಯಸಂಧಂ ದಶರಥತನಯಂ ಶ್ಯಾಮಲಂ ಶಾಂತಮೂರ್ತಿಂ
ವಂದೇ ಲೋಕಾಭಿರಾಮಂ ರಘುಕುಲತಿಲಕಂ ರಾಘವಂ ರಾವಣಾರಿ
ಕನ್ನಡದಲ್ಲಿ :

ರಾಜೇಂದ್ರ ಸತ್ಯವಂತ ದಶರಥ ತನಯ ಶ್ಯಾಮಲ ಶಾಂತ
ಲೋಕಾನಂದಕ ರಾಘವ ರಾವಣಾರಿ ರಾಮನಿಗೆ ನಮಿಪೆ

ವಿವರಣೆ :

ರಾಜಾಧಿರಾಜರುಗಳಿಗೆ ಚಕ್ರವರ್ತಿಯಾದ , ಸತ್ಯದ ಸಾಕಾರಮೂರ್ತಿ, ದಶರಥ ತನಯ, ಸರ್ವಾಂಗ ಸುಂದರ, ಶಾಂತಿಯೇ ಮೈವೆತ್ತವ , ರಾವಣಾಂತಕ , ರಘುವಂಶದ ಕಿರೀಟ ರತ್ನ , ಮತ್ತು ಎಲ್ಲರ ಕಣ್ಮಣಿಯಾದ ಶ್ರೀರಾಮಚಂದ್ರನಿಗೆ ನನ್ನ ಭಕ್ತಿಪೂರ್ವಕ ನಮನಗಳು.

ಶ್ಲೋಕ  - 24 -  ಸಂಸ್ಕೃತದಲ್ಲಿ :

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ
ಕನ್ನಡದಲ್ಲಿ :

ರಾಮಂಗೆ ರಾಮಭದ್ರಂಗೆ ರಾಮಚಂದ್ರಂಗೆ ಬ್ರಹ್ಮಂಗೆ
ರಘುನಾಥಂಗೆ ನಾಥಂಗೆ ಸೀತಾಪತಿಗೆ ವಂದಿಸುವೆ

ವಿವರಣೆ :

ರಾಮನಿಗೆ ನಮನಗಳು. ಪ್ರೀತಿಯ ರಾಮನಿಗೆ, ತಂಪಾದ ಚಂದ್ರನಂತೆ ಶಾಂತಿಯಿಂದ ಕಂಗೊಳಿಸುವ ಶ್ರೀ ರಾಮನಿಗೆರಘುವಂಶದ ಚಕ್ರವರ್ತಿಗೆ, ನನ್ನ ಭಕ್ತಿಪೂರ್ವಕ ನಮನಗಳು. ವಿಶ್ವದ ಅಧಿಪತಿ, ಹಾಗೂ ಜಾನಕೀ ರಮಣನಿಗೆ ನಮನಗಳು.

ಶ್ಲೋಕ  - 25 -  ಸಂಸ್ಕೃತದಲ್ಲಿ :

ಶ್ರೀರಾಮ ರಾಮ ರಘುನಂದನ ರಾಮ ರಾಮ
ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ
ಶ್ರೀರಾಮ ರಾಮ ರಣಕರ್ಕಶ ರಾಮ ರಾಮ
ಶ್ರೀರಾಮ ರಾಮ ಶರಣಂ ಭವ ರಾಮ ರಾಮ  
ಕನ್ನಡದಲ್ಲಿ :

ಶ್ರೀರಾಮ ರಾಮ ರಘುನಂದನ ರಾಮ ರಾಮ
ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ
ಶ್ರೀರಾಮ ರಾಮ ರಣಧೀರ ರಾಮ ರಾಮ
ಶ್ರೀರಾಮ ರಾಮ ಎನಗಾಶ್ರಯ ನೀಡು ರಾಮ

ವಿವರಣೆ :

ರಘುವಂಶದ ಕಣ್ಮಣಿಯಾದ ಶ್ರೀರಾಮನಲ್ಲಿ ನಾನು ಶರಣಾಗುವೆನು. ಭರತನ ಹಿರಿಯಣ್ಣನಾದ ರಾಮಚಂದ್ರ ಪ್ರಭುವಿನ ಪಾದಗಳಲ್ಲಿ ಶರಣಾಗಿ ವಂದಿಸುವೆ. ಯುದ್ಧದಲ್ಲಿ ಶತ್ರುಗಳಿಗೆ ಅರಿಭಯಂಕರನಾದ ಶ್ರೀರಾಮ. ಭಗವಾನ್ ಶ್ರೀರಾಮನಲ್ಲಿ ಶರಣಾಗುವೆ.

ಶ್ಲೋಕ  - 26 - ಸಂಸ್ಕೃತದಲ್ಲಿ : ಶರಣಾಗತಿ ಮಂತ್ರ:

ಶ್ರೀರಾಮಚಂದ್ರಚರಣೌ ಮನಸಾ ಸ್ಮರಾಮಿ    
ಶ್ರೀರಾಮಚಂದ್ರಚರಣೌ ವಚಸಾ ಘಣಾಮಿ
ಶ್ರೀರಾಮಚಂದ್ರಚರಣೌ ಶಿರಸಾ ನಮಾಮಿ
ಶ್ರೀರಾಮಚಂದ್ರಚರಣೌ ಶರಣಂ ಪ್ರಪದ್ಯೇ  
ಕನ್ನಡದಲ್ಲಿ :

ಶ್ರೀರಾಮ ಚಂದ್ರನ ಪಾದಗಳ ನೆನೆವೆ ಮನದಲ್ಲಿ
ಶ್ರೀರಾಮ ಚಂದ್ರನ ಪಾದಗಳ ಬಣ್ಣಿಪೆ ಮಾತಿನಲ್ಲಿ
ಶ್ರೀರಾಮ ಚಂದ್ರನ ಪಾದಗಳ ನಮಿಪೆ ಶಿರಬಾಗಿ
ಶ್ರೀರಾಮ ಚಂದ್ರನ ಪಾದಗಳ ಶರಣು ಹೊಗುವೆ

ವಿವರಣೆ :

ನನ್ನ ಮನದಲ್ಲಿ ಶ್ರೀರಾಮಚಂದ್ರನ ದಿವ್ಯ ಪಾದಗಳನ್ನು ಸದಾ ನೆನೆವೆ. ಶ್ರೀರಾಮಚಂದ್ರನ ಪರಮ ಪಾವನ ಪಾದಗಳನ್ನು ಸದಾ ಮಾತುಗಳ ಮೂಲಕ ಸದಾ ಹಾಡಿಹೊಗಳುವೆ. ಶ್ರೀರಾಮಚಂದ್ರನ ಕಮಲ ಪಾದಗಳಿಗೆ ನನ್ನ ಶಿರವನ್ನು ತಾಗಿಸಿ ಸದಾ ಭಕ್ತಿಯಿಂದ ನಮಿಸುವೆ. ನನ್ನ ಇಡೀ ಶರೀರವನ್ನು ಬಾಗಿಸಿ ಶ್ರಿರಾಮಚಂದ್ರನಲ್ಲಿ ಶರಣಾಗುವೆ.

ಸರ್ವವನ್ನೂ ದಯಪಾಲಿಸುವವ ಶ್ರೀರಾಮಚಂದ್ರ :

ಶ್ರೀ ರಾಮರಕ್ಷಾಸ್ತೋತ್ರವು ಎಲ್ಲ ವಿಘ್ನಗಳನ್ನೂ ಮತ್ತು ಅಪಾಯಗಳನ್ನೂ ನಿವಾರಿಸಿ, ಭಕ್ತಿ , ಮುಕ್ತಿ, ರಕ್ಷಣೆ ಮತ್ತು ದೈವೀಕ ಹಾಗೂ ಭೌತಿಕ ಸರ್ವ ಸಂಪದಗಳನ್ನೂ ದಯಪಾಲಿಸುತ್ತದೆ.
ಯಾರು ಈ ಸ್ತೋತ್ರವನ್ನು ದಿನನಿತ್ಯವೂ ಭಕ್ತಿಯಿಂದ ಪಠಿಸುವರೋ ಅವರಿಗೆ :
1. ಭಕ್ತಿ (ಶ್ರೀ ಶ್ರೀ ಸೀತಾರಾಮನಲ್ಲಿ ಭಕ್ತಿ)
2. ‎ಮುಕ್ತಿ ( ಪರಮೊಚ್ಚ ಬಂಧಮುಕ್ತಿ)
3. ‎ಭುಕ್ತಿ ( ಪ್ರಾಪಂಚಿಕ ಸುಖ ಸಂತೋಷಗಳು )
4. ‎ಸಾಧನೆಗಳು ( ಎಲ್ಲ ವಿಧದ ಶಕ್ತಿಗಳು ಹಾಗೂ ಸಿದ್ಧಿಗಳು ಲಭಿಸುವುದು)
5. ‎ಸ್ವಯಂ ಶ್ರೀರಾಮಚಂದ್ರ ಪ್ರಭುವಿನಿಂದಲೇ ಎಲ್ಲ ವಿಧದ ಭಯ ಹಾಗೂ ವಿಘ್ನಗಳಿಂದ ರಕ್ಷಣಾ ಕವಚವು ಲಭಿಸುವುದು.
6. ‎ಜಯ ( ವಿಜಯ ಹಾಗೂ ಎಲ್ಲೆಲ್ಲೂ ಮಂಗಳಕರವು ಲಭಿಸುವುದು - ಜಯ - ಮಂಗಳ )
7. ದೀರ್ಘಾಯಸ್ಸು ( ಚಿರಾಯು)
8. ಸಂತೋಷ ( ಆಶೀರ್ವದಿಸಲ್ಪಡುವುದು)
9. ‎ನಮ್ರತೆ ( ವಿನಯವಂತನಾಗುವುದು)
10. ‎ಮಕ್ಕಳು ಮತ್ತು ಸಂತಸ ಸಂಸಾರ
11. ‎ಎಲ್ಲ ವಿಧದ ಸಂಪತ್ತುಗಳು ( ದೈವೀಕ ಹಾಗೂ ಭೌತಿಕ ಸಂಪತ್ತುಗಳು).  ಎಲ್ಲವೂ ಲಭಿಸುವುದು.

ಶ್ಲೋಕ  - 27 -  ಸಂಸ್ಕೃತದಲ್ಲಿ :

ಮಾತಾ ರಾಮೋ ಮತ್ಪಿತಾ ರಾಮಚಂದ್ರಃ   
ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ
ಸರ್ವಸ್ವಂ ಮೇ   ರಾಮಚಂದ್ರೋ ದಯಾಲುಃ
ನಾನ್ಯಂ ಜಾನೇ  ನೈವ ಜಾನೇ ನ ಜಾನೇ          
ಕನ್ನಡದಲ್ಲಿ :

ತಾಯಿ ರಾಮನು ನನ್ನ ತಂದೆ ರಾಮಚಂದ್ರ
ಸ್ವಾಮಿ ರಾಮನು ನನ್ನ ಗೆಳೆಯಯ ರಾಮಚಂದ್ರ
ದಯಾಳು ರಾಮಚಂದ್ರನೆ ಎಲ್ಲವೂ ಎನಗೆ
ಬೇರೊಂದನರಿಯೆ ನಾನರಿಯೆ ಕೊಂಚವೂ ಅರಿಯೆ

ವಿವರಣೆ :

ಶ್ರೀರಾಮಚಂದ್ರ ಪ್ರಭುವೇ ನನ್ನ ಮಾತೆ, ಶ್ರೀ ಸೀತಾಪತಿಯೇ ನನ್ನ ಜನಕನು, ನನ್ನ ಸ್ವಾಮಿ ( ದೈವ, ಯಜಮಾನ, ಪತಿ ) ರಘುಕುಲತಿಲಕನು. ನನ್ನ ಆತ್ಮೀಯ ಸ್ನೇಹಿತ ಶ್ರೀರಾಮನು ಮತ್ತೂ ಮುಂದುವರೆದು ಕರುಣಾ ಹೃದಯಿಯಾದ ಶ್ರೀರಾನಚಂದ್ರನೇ ನನ್ನ ಎಲ್ಲಾ ಸರ್ವಸ್ವವೂ, ನನಗೆ ಬೇರಾರೂ ಅರಿಯರು ಅವನಷ್ಟು ಪ್ರೀತಿಪಾತ್ರರು ನನಗೆ ಬೇರಾರೂ ಇಲ್ಲವೇ ಇಲ್ಲ.

ಶ್ಲೋಕ - 28 - ಸಂಸ್ಕೃತದಲ್ಲಿ :

ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ
ಪುರತೋ ಮಾರುತಿರ್ಯಸ್ಯ ತಂ ವಂದೇ ರಘುನಂದನಮ್
ಕನ್ನಡದಲ್ಲಿ :

ಯಾರ ಬಲದೊಳು ಲಕ್ಷ್ಮಣನೊ ಸೀತೆ ಯಾರೆಡದೊಳೋ
ಯಾರ ಮುಂದೆ ಮಾರುತಿಯೋ ಆ ರಘುನಂದನನ ವಂದಿಪೆ

ವಿವರಣೆ :

ಯಾರ ಬಲಭಾಗದಲ್ಲಿ ಆದಿಶೇಷನ ಅವತಾರವಾದ ಲಕ್ಷ್ಮಣನೂ ಎಡಭಾಗದಲ್ಲಿ ಮಿಥಿಲಾನಗರದ ಜನಕರಾಜನ ಸುಪುತ್ರಿಯಾದ ಜಾನಕಿಯೂ ಮತ್ತು ಮುಂಭಾಗದಲ್ಲಿ ಪವನ ಪುತ್ರ ಕೇಸರೀನಂದನ ಹನೂಮಂತನೂ ಆಸೀನರಾಗಿರುವರೋ ಆ ರಘುಕುಲ ತಿಲಕ ಶ್ರೀರಾಮಚಂದ್ರನಿಗೆ ಸದಾ ನಮಿಸುವೆ.

ಶ್ಲೋಕ - 29 - ಸಂಸ್ಕೃತದಲ್ಲಿ :

ಲೋಕಾಭಿರಾಮಂ ರಣರಂಗಧೀರಂ
ರಾಜೀವನೇತ್ರಂ ರಘುವಂಶ ನಾಥಮ್
ಕಾರುಣ್ಯರೂಪಂ ಕರುಣಾಕರಂ ತಂ
ಶ್ರೀರಾಮಚಂದ್ರಂ ಶರಣಂ ಪ್ರಪದ್ಯೇ              
ಕನ್ನಡದಲ್ಲಿ :

ಜಗದಾನಂದಕರನ ರಣರಂಗಧೀರನ
ಕಮಲಗಣ್ಣವನ ರಘುವಂಶದೊಡೆಯನ
ಕಾರುಣ್ಯರೂಪನ ಕರುಣಾಕರನನು
ಶ್ರೀರಾಮ ಚಂದಿರನ ಶರಣು ಹೊಗುವೆ

ವಿವರಣೆ :

ಸಮಸ್ತ ಲೋಕಗಳ ಕಣ್ಮಣಿ, ಯುದ್ಧಭೂಮಿಯಲ್ಲಿ ಮಹಾಪರಾಕ್ರಮಿ, ಕಮಲನೇತ್ರವುಳ್ಳವ , ರಘುವಂಶದ ಸರ್ವೋತ್ತಮ ಚಕ್ರವರ್ತಿ ಮತ್ತು ದಯೆಯೇ ಮೂರ್ತಿವೆತ್ತ ಭಗವಾನ್ ಶ್ರೀರಾಮಚಂದ್ರನಿಗೆ ನಾನು ಶರಣಾಗುವೆ.

ಶ್ಲೋಕ - 30 - ಸಂಸ್ಕೃತದಲ್ಲಿ :

ಮನೋಜವಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿ ಮತಾಂವರಿಷ್ಠಂ
ವಾತಾತ್ಮಜಂ ವಾನರಯೂಥಮುಖ್ಯಂ
ಶ್ರೀರಾಮದೂತಂ ಶರಣಂ ಪ್ರಪದ್ಯೇ      
ಕನ್ನಡದಲ್ಲಿ :

ಮನೋಜವ ಮಾರುತಸಮ ವೇಗಿ
ಜಿತೇಂದ್ರಿಯನೆ ಜಾಣರಲ್ಲಿ ಜಾಣ
ವಾತಾತ್ಮಜನೆ ಕಪಿಸೈನ್ಯ ಮುಖ್ಯ
ಶ್ರೀರಾಮದೂತನೆ ಶರಣೆಂಬೆ ನಿನಗೆ

ವಿವರಣೆ :

ಮನೋವೇಗವನ್ನೂ ಮೀರಿ ಪಯಣಿಸುವ ಹಾಗೂ ತನ್ನ ಪಿತನಾದ ವಾಯುವಿನ ವೇಗವನ್ನು ಸರಿಗಟ್ಟುವ, ಇಂದ್ರಿಯನಿಗ್ರಹಿ, ಜ್ಞಾನಿಗಳಲ್ಲಿ ಮಹಾಜ್ಞಾನಿ, ವಾನರ ಸೈನ್ಯದ ಮಹಾದಂಡನಾಯಕ ಮತ್ತು ಶ್ರೀರಾಮಚಂದ್ರನ ಮಹಾ ಸಂದೇಶವಾಹಕನಾದ ಹನೂಮಂತನಲ್ಲಿ ನಾನು ಶರಣಾಗುವೆ.

ಶ್ಲೋಕ - 31 - ಸಂಸ್ಕೃತದಲ್ಲಿ :

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ
ಕನ್ನಡದಲ್ಲಿ :

ಕಾವ್ಯ ಶಾಖೆಯನೇರಿ ಸವಿನುಡಿಯೊಳಿಂಪಾಗಿ
ರಾಮರಾಮೆನ್ನುತಿಹ ವಾಲ್ಮೀಕಿ ಕೋಗಿಲೆಗೆ ವಂದನೆ


ವಿವರಣೆ :

ಶ್ರೀರಾಮನ ಜೇನಿನಂತಹ ನಾಮವನ್ನು ಸದಾ ಹಾಡುವ, ಕೋಗಿಲೆಯು ಮರದಮೇಲೆ ಕುಳಿತು ಮಧುರವಾಗಿ ರಾಮನಾಮವನ್ನು ಸ್ತುತಿಸುವಂತೆ ಹಾಡುವ ಮಹರ್ಷಿ ವಾಲ್ಮೀಕಿಗೆ ನನ್ನ ನಮನಗಳು.

ಶ್ಲೋಕ - 32 - ಸಂಸ್ಕೃತದಲ್ಲಿ :

ಆಪದಾಂ ಅಪಹರ್ತಾರಂ ದಾತಾರಂ ಸರ್ವ ಸಂಪದಂ
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ                        
ಕನ್ನಡದಲ್ಲಿ :

ಸಂಕಟ ನಿವಾರಕಗೆ ಸರ್ವಸಂಪದವೀವಗೆ
ಲೋಕಾನಂದಕ ಶ್ರೀರಾಮಗೆ ಮರಮರಳಿ ನಮಿಪೆ


ವಿವರಣೆ :

ಯಾರು ಎಲ್ಲ ವಿಧದ ಅಪಾಯಗಳನ್ನೂ ಹಾಗೂ ವಿಘ್ನಗಳನ್ನೂ ನಾಶಮಾಡುವನೊ ಎಲ್ಲ ವಿಧದ ಸಂಪತ್ತುಗಳನ್ನೂ ಸಂರಕ್ಷಿಸುವವನೊ ಸಕಲ ಲೋಕಗಳ ಕಣ್ಮಣಿಯಾದ ಶ್ರೀರಾಮಚಂದ್ರನಿಗೆ ಪದೇ ಪದೇ ನಮಿಸುವೆನು.

ಶ್ಲೋಕ - 33 - ಸಂಸ್ಕೃತದಲ್ಲಿ :

ಭರ್ಜನಂ ಭವಬೀಜಾನಾಂ ಅರ್ಜನಂ ಸುಖಸಂಪದಾಂ
ತರ್ಜನಂ ಯಮದೂತಾನಾಂ ರಾಮ ರಾಮೇತಿ ಗರ್ಜನಂ
ಕನ್ನಡದಲ್ಲಿ :

ಭವದ ಬೀಜವ ಸುಟ್ಟು ಸುಖ ಸಂಪದವ ಕೊಟ್ಟು
ಯಮದೂತರನಟ್ಟುವುದು ರಾಮರಾಮೆಂಬ ಗರ್ಜನೆ


ವಿವರಣೆ :

ರಾಮನಾಮದ ಪಥವು ಪುನರ್ಜನ್ಮದ ಕಾರಣಗಳನ್ನು ನಾಶಪಡಿಸಿ ( ಮುಕ್ತಿಯನ್ನು ಕರುಣಿಸುವುದು) ಸಂತೋಷ ಸಮೃದ್ಧಿಗಳನ್ನು ಉಂಟುಮಾಡಿ ಯಮರಾಜನ ಸಂದೇಶವಾಹಕರಲ್ಲಿ ಭೀತಿಯನ್ನು ಉಂಟುಮಾಡುವುದು.

ಶ್ಲೋಕ - 34 - ಸಂಸ್ಕೃತದಲ್ಲಿ :

ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂ ಭಜೇ
ರಾಮೇಣಾಭಿಹತಾ ನಿಶಾಚರಮೂ ರಾಮಾಯ ತಸ್ಮೈ ನಮಃ
ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯ ದಾಸೋಸ್ಮ್ಯಹಂ
ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮಮಾಮುದ್ಧರ
ಕನ್ನಡದಲ್ಲಿ :

ರಾಮನು ರಾಜರತ್ನನವಗೆ ಜಯ ರಮೇಶ ರಾಮನನು ಭಜಿಪೆ
ರಾಮನಿಂ ಹತವಾಯ್ತು ರಕ್ಕಸ ಸೇನೆ ರಾಮನಿಗೆ ನಮಿಪೆ
ರಾಮನಿಗಿಂತಲಾಶ್ರಯ ಬೇರಿಲ್ಲ ರಾಮನ ಸೇವಕನು ನಾ
ರಾಮನಲೆನ್ನ ಚಿತ್ತವಳಿಯಲಿ ಹೇ ರಾಮ ಸಲಹೆನ್ನನು

ವಿವರಣೆ :

ಭೂಲೋಕದ ರಾಜರಲ್ಲಿ ಮುಕುಟಪ್ರಾಯನಾದ, ಸದಾ ವಿಜಯಿಯಾದ, ರಮಾದೇವಿಯ ರಮಣನಾದ ( ಸೀತಾ, ಮೂಲದ ರಮಾ) ಶ್ರೀರಾಮಚಂದ್ರನನ್ನು ಸದಾ ಪೂಜಿಸುವೆ. ಅವನಿಂದ ನಿಶಾಚರ ರಾಕ್ಷಸ ಗಣಗಳು ನಾಶವಾದವು, ಅಂಥಹ ಶ್ರೀರಾಮನಿಗೆ ನನ್ನ ನಮನಗಳು ಹಾಗೂ ಅವನಿಗೇ ನನ್ನ ಪ್ರಾರ್ಥನೆ. ಅವನನ್ನು ಹೊರತುಪಡಿಸಿ ಬೇರಾರೂ ಅಥವಾ ಬೇರಾವುದೂ ಪೂಜಿಸಲು ಯೋಗ್ಯವಲ್ಲ. ಹಾಗಾಗಿ ನಾನು ಕೇವಲ ರಾಮಸೇವಕ ಮಾತ್ರ. ನನ್ನ ಮನಸ್ಸೆಲ್ಲವೂ ರಾಮಚಂದ್ರನಲ್ಲೇ ಐಕ್ಯವಾಗಿದೆ. , ರಾಮನೆ ! ದಯಮಾಡಿ ನನ್ನನ್ನು ಪಾತಾಳದಿಂದ ಮೇಲೆತ್ತಿ ಉದ್ಧರಿಸು.

ಈ ಶ್ಲೋಕದ ಕೆಲವು ವೈಶಿಷ್ಟ್ಯಗಳೆಂದರೆ :

ಇದು ಅತ್ಯಂತ ಶ್ರೇಷ್ಟವಾದ ಶಾರ್ದೂಲವಿಕ್ರೀಡಿತ ಛಂದಸ್ಸಿನ ದೈವೀ ಶ್ಲೋಕ. ಈ ಶ್ಲೋಕದಲ್ಲಿ ಸಂಸ್ಕೃತದಲ್ಲಿನ ಸಮಸ್ತ ವಿಭಕ್ತಿಗಳನ್ನೂ ಒಂದೇ ಶ್ಲೋಕದಲ್ಲಿ ಭಗವಾನ್ ಶ್ರೀರಾಮನ ಹೆಸರಿನಲ್ಲಿ ಉಪಯೋಗಿಸಲಾಗಿದೆ. ಈ ಶ್ಲೋಗದಲ್ಲಿ ನಾಲ್ಕು ಸಾಲುಗಳಿದ್ದು ಪ್ರತಿಯೊಂದು ಸಾಲಿನಲ್ಲೂ ಹತ್ತೊಂಬತ್ತು ಅಕ್ಷರಗಳನ್ನು ಉಪಯೋಗಿಸಲಾಗಿದೆ. ಎಲ್ಲ ನಾಲ್ಜೂ ಪಾದಗಳಲ್ಲಿ ಒಂದೇ ವಿಧದ ಮಾದರಿಯನ್ನು ಅನುಸರಿಸಲಾಗಿದೆ.
ಪ್ರತಿಯೊಂದು ಸಾಲಿನಲ್ಲೂ ಅಕ್ಷರಗಳ ಮಾದರಿಯು ಈ ರೀತಿಯಲ್ಲಿವೆ :
s s s i i s i s i i i s, s s i s s i s ( = ಶಾರ್ದೂಲವಿಕ್ರೀಡಿತಂ - ಪ್ರತಿ ಹನ್ನೆರಡು ಅಕ್ಷರಗಳ ನಂತರ ಪದ-ವಿರಾಮ ವಿರುವುದು)
ಇದರಲ್ಲಿ -
s - ಭಾರವಾದ ಅಕ್ಷರಗಳು - ಅಂದರೆ ದೀರ್ಘ ಮಾತ್ರೆಯ ವರ್ಣ
i - ಹಗುರವಾದ ಅಕ್ಷರಗಳು - ಅಂದರೆ ಸಹಜ ಸ್ಥಿತಿಯ ಹಗುರ ಮಾತ್ರೆಯ ಅಕ್ಷರಗಳು

ಶಾರ್ದೂಲವೆಂದರೆ ಸಿಂಹ - ಕಾಡಿನ ರಾಜ. ಆದ್ದರಿಂದ ರಾಮಚರಿತಮಾನಸದ ಪ್ರಾರಂಭದಲ್ಲಿ ಗೋಸ್ವಾಮಿಯವರು ಶ್ರೀರಾಮಚಂದ್ರನಿಗೆ ನಮಸ್ಕರಿಸುವ ಮೊದಲ ಶ್ಲೋಕವನ್ನು ಇದೇ ಶಾರ್ದೂಲವಿಕ್ರೀಡಿತ ಛಂದಸ್ಸಿನಲ್ಲಿ  ತನ್ನ ಇಷ್ಟದೈವವಾದ ಶ್ರೀರಾಮಚಂದ್ರನನ್ನು ಸಮಸ್ತ ಭಗವದ್ಸ್ವರೂಪಿಗಳ ಚಕ್ರವರ್ತಿಯೆಂದು ವರ್ಣಿಸಿದ್ದಾರೆ. ಶಾರ್ದೂಲವಿಕ್ರೀಡಿತ ಛಂದಸ್ಸು ಅತ್ಯಂತ ಶುಭಪ್ರದವಾದದ್ದು. ಕವಿಗಳು ನೂತನ ದಂಪತಿಗಳಿಗೆ ಆಶೀರ್ವಚನವನ್ನು ತಿಳಿಸುವಾಗ ನೂತನ ದಂಪತಿಗಳು ಮದುವೆ ಮಂಟಪದಲ್ಲಿ ಹಾರಗಳನ್ನು ಪರಸ್ಪರ ಬದಲಾಯಿಸಿಕೊಳ್ಳುವ ಸಂದರ್ಭದಲ್ಲಿ ಶಾರ್ದೂಲವಿಕ್ರೀಡಿತ ಛಂದಸ್ಸಿನಲ್ಲೇ ಆಶೀರ್ವದಿಸುವರು.

ಇಲ್ಲಿ ಎಲ್ಲ ವಿಭಕ್ತಿಗಳೂ ಸರಿಯಾದ ರೀತಿಯಲ್ಲೇ ರಚಿಸಲಾಗಿದೆ.

ರಾಮೋ ರಾಜಮಣಿಃ ಸದಾ ವಿಜಯತೇ (ರಾಮಃ - ಪ್ರಥಮಾ, ರಾಮೋ = ರಾಮಃ)
ರಾಮಂ ರಮೇಶಂ ಭಜೆ (ರಾಮಮ್ - ದ್ವಿತೀಯ)
ರಾಮೇಣಾಭಿಹತಾ ನಿಶಾಚರಚಮೂಃ ( ರಾಮೇಣ - ತೃತೀಯ)
ರಾಮಾಯ ತಸ್ಮೈ ನಮಃ ( ರಾಮಾಯ - ಚತುರ್ಥಿ)
ರಾಮಾನ್ನಾಸ್ತಿ ಪರಾಯಣಂಪರತರಂ (ರಾಮಾತ್ - ಪಂಚಮಿ, ರಾಮಾತ್ + + ಅಸ್ತಿ = ರಾಮಾನ್ನಾಸ್ತಿ)
ರಾಮಸ್ಯ ದಾಸೋಸ್ಮ್ಯಹಂ (ರಾಮಸ್ಯ - ಷಷ್ಟಿ)
ರಾಮೆ ಚಿತ್ತಲಯಸ್ಸದಾ ಭವತು ಮೆ (ರಾಮೆ - ಸಪ್ತಮಿ)
ಭೊ ರಾಮ ! ಮಾಮುದ್ಧರ (ರಾಮ ! - ಸಂಬೋಧನ ಪ್ರಥಮ).

ಶ್ಲೋಕ-35- ಸಂಸ್ಕೃತದಲ್ಲಿ :

ರಾಮ ರಾಮೇತಿ ರಾಮೇತಿ ರಮೇ ರಾಮೇ ಮನೋರಮೇ
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ       
ಕನ್ನಡದಲ್ಲಿ :

ಶಂಕರನು ( ಪಾರ್ವತಿಗೆ ) ನುಡಿದ :
ರಾಮ ರಾಮೆಂದು ರಮಿಪೆ ರಾಮನಲಿ ಮನೋರಮೆ
ಸಹಸ್ರನಾಮಕೆ ಸರಿದು ಶ್ರೀರಾಮನಾಮವಿದು

ವಿವರಣೆ :

, ಸುಂದರ ವದನೆ ಪಾರ್ವತಿಯೆ ! ನನ್ನ ಮನವು ಸುಂದರ ನಾಮವಾದ ರಾಮ ರಾಮ ರಾಮ ಎಂದು ಸ್ತುತಿಸುತ್ತಾ ಆನಂದವನ್ನು ಅನುಭವಿಸುವುದು. ಒಮ್ಮೆ ರಾಮ ನಾಮವನ್ನು ಉಚ್ಚರಿಸಿದರೆ ಅದು ಬೇರೆ ಯಾವುದೇ ದೇವರುಗಳ ನಾಮವನ್ನು ಸಹಸ್ರಬಾರಿ ಉಚ್ಚರಿಸುವುದಕ್ಕೆ ಸಮ.
ಅತ್ಯಂತ ಆಕರ್ಷಕ ಹಾಗೂ ಅಂತಿಮ ಶರಣಾಗತಿಯಾದ ಶ್ರೀರಾಮನಂತೆ ಶ್ರೀರಾಮ ನಾಮವೂ ಅತ್ಯಂತ ಸುಮಧುರ ಮತ್ತು ರಕ್ಷಣೆಯನ್ನು ನೀಡುವ ಎಲ್ಲ ಮಂತ್ರಗಳ ಪೈಕಿ ಸರ್ವಶ್ರೇಷ್ಟವಾದದ್ದು. ಶ್ರೀರಾಮ ರಕ್ಷಾಸ್ತೋತ್ರವೂ ಸಹ ರಾಮನಾಮದ ಸರ್ವೋಚ್ಚ ವೈಭವವನ್ನು ಸಾರುವ ಸ್ತೋತ್ರ.

ಇತಿ ಶ್ರೀ ಬುಧಕೌಶಿಕವಿರಚಿತಂ ಶ್ರೀರಾಮರಕ್ಷಾಸ್ತೋತ್ರಂ ಸಂಪೂರ್ಣಂ

ಇಂತು ಬುಧಕೌಶಿಕ ವಿರಚಿತ ಶ್ರೀರಾಮರಕ್ಷಾ ಸ್ತೋತ್ರ ಸಂಪೂರ್ಣ.

ಶ್ರೀ ಸೀತಾರಾಮಚಂದ್ರಾರ್ಪಣಮಸ್ತು

ಲೇಖನದ ಮೂಲಗಳು :

ಸಂಸ್ಕೃತ ಶ್ಲೋಕಗಳು - lordrama.co.in
ಕನ್ನಡ ಶ್ಲೋಕಗಳು - ಶ್ರೀ.ಬಿ.ಎಸ್.ಚಂದ್ರಶೇಖರ ಅವರ -  ಸವಿಗನ್ನಡ ಸ್ತೋತ್ರಚಂದ್ರಿಕೆ
ಪ್ರಸ್ತಾವನೆ ಹಾಗೂ ವಿವರಣೆಗಳ ಆಂಗ್ಲ ವಿವರಣೆಗಳು - lordrama.co.in
ಆಂಗ್ಲಭಾಷೆಯ ಭಾವಾರ್ಥವನ್ನು ಕನ್ನಡದಲ್ಲಿ ಪ್ರಸ್ತುತಿ - ಗುರುಪ್ರಸಾದ್ ಹಾಲ್ಕುರಿಕೆ.






                    









      









No comments:

Post a Comment

ದಾರಿದ್ರ್ಯ ದಹನ ಶಿವಸ್ತೋತ್ರ

https://savigannadastotra.blogspot.com/2018/10/blog-post.html ದಾರಿದ್ರ್ಯ ದಹನ ಶಿವಸ್ತೋತ್ರ ಪ್ರಸ್ತಾವನೆ : ಸಂಸ್ಕ...